ಇಷ್ಟೆಲ್ಲಾ ಇದೆ ..

Wednesday, July 17, 2013

ಹೃದಯದ ಮಾತು


ಹೃದಯದ ಮಾತು 

ಬಾಳದುದ್ದಕ್ಕೂ ನೂರಾರು ದಾರಿ 
ಸರಿ ದಾರಿ ಹಿಡಿದು ನೀನಾಗು ಮಾದರಿ..

ಏನೇ ಮರೆತರೂ ಮಾನವೀಯತೆ ಮರೆಯದಿರು 
ಸಹಿಸದಿರು ಅನ್ಯಾಯ ನಿನ್ನ ಕಣ್ಣೆದುರು..

ಭೋಗಕ್ಕಾಗಿ ಮರೆಯದಿರು ನಿನ್ನ ಅಂತರಾತ್ಮ 
ನೀ ಮಾಡುವ ಸತ್ಕಾರ್ಯಕ್ಕೆ ಮೆಚ್ಚಬೇಕು ಆ ಪರಮಾತ್ಮ 

ನಿನ್ನ ನಿಲುವಿಗೆ ಸಿಗದಿದ್ದರೂ ಬೆಂಬಲ
ಬಿಡದಿರು ಎಂದಿಗೂ ಸಾಧಿಸಬೇಕೆಂಬ ಹಂಬಲ 

ಮಾಡದಿರು ಏನನ್ನೂ ಮನಸಾಕ್ಷಿ ವಿರುದ್ದ 
ಪ್ರಾಮಾಣಿಕ ಪ್ರಯತ್ನಕ್ಕೆ  ನೀನಾಗು ಬದ್ಧ 

ನೀ ಸೋತಾಗ ಕೇಳಿಬರುವುದು ನೂರಾರು ಕೂಗು 
ಪ್ರಯತ್ನವನ್ನು ಎಂದಿಗೂ ನಿಲ್ಲಿಸದೆ  ಮುಂದೆ ಸಾಗು 

ಸೋಲಿನ ಪ್ರತಿ ಗಳಿಗೆಯಲ್ಲೂ ಉದಯೊನ್ಮುಖಿಯಾಗು 
ದುಡ್ಡಿಗಾಗಿ ದುಡಿಯದೆ ದುಡಿಮೆ  ಹಿಡಿದು ಸಾಗು 

ನಿನ್ನ ಆಸೆಗೆ ಎಂದಿಗೂ ಮಾಡಲಾಗದು ಎಣಿಕೆ
ದೇಶಕ್ಕೆ ಸಿಗಲಿ ನಿನ್ನಿಂದ  ಏನಾದರು ಕಾಣಿಕೆ 

ಮನುಷ್ಯತ್ವಕಿಂತ ಮಹತ್ವ ಮತ್ತೊಂದಿಲ್ಲ 
ಅದನ್ನು ಮರೆತರೆ ನೀನು ಮನುಷ್ಯನೇ ಅಲ್ಲ 

ಹೆತ್ತ ತಾಯಿಯ ಹೊತ್ತ ಭೂಮಿಯ ಮರೆಯಬೇಡ
ಗೊತ್ತಿರದೇ ಯಾರನ್ನೂ, ಯಾವತ್ತೂ  ಅಳಿಯಬೇಡ

ಜೀವನವೇ ಪಾಠಶಾಲೆ .ಅನುಭವಗಳೇ ಪಾಠಗಳು 
ಗೆಲ್ಲಬೇಕೆಂದರೆ ದುಡಿಯಬೇಕು ನೀ ಹಗಲಿರುಳು 

ತಿಳಿಯದು ಯಾರಿಗೂ ನಿನ್ನ ಮರಣದ ರಹಸ್ಯ 
ಕಣ್ಣು ಮುಚ್ಚುವ ಮುಂಚೆಯೇ ರೂಪಿಸಿಕೋ ನಿನ್ನದೇ ಭವಿಷ್ಯ ..

No comments:

Post a Comment