ಇಷ್ಟೆಲ್ಲಾ ಇದೆ ..

Saturday, March 21, 2015

ನಿಜವಾದ ಸಂತೋಷ


ನಿಜವಾದ ಸಂತೋಷ

ನಾವು ಪಡುವ ಸಂತೋಷಗಳು ನಮ್ಮ ದುಃಖಕ್ಕೂ ಕಾರನವಾಗುದು ಎಂಬ ಮಾತಿದೆ. ಆಗಿದ್ದರೆ ನಿಜವಾದ ಸಂತೋಷವೆಂದರೆ ಏನು ?? ಮನುಷ್ಯ ಯಾವಾಗ ಸಂತೋಷವಾಗುತ್ತಾನೆ ? ಅವನಿಗೆ ಏನು ಸಿಕ್ಕರೆ ಸಂತ್ಹೊಶವಾಗುತ್ತಾನೆ ?  ನಿಜವಾದ ಸಂತೋಷ ಪಡೆಯುವುದಾದರೂ ಹೇಗೆ ? ಎಂಬ ದ್ವಂದ್ವ ವಿಚಾರಗಳು ನಮ್ಮನು ಕಾಡುತ್ತವೆ. ಆದರೆ ಆ ಸಂತೋಷ ನಮ್ಮಲ್ಲಿಯೇ ಇದೆ ಎಂಬುದು ಅಪ್ಪಟ ಸತ್ಯ.


ಸಂಬಳ ಜಾಸ್ತಿ ಆದಾಗ , ಮೊದಲ ಪ್ರೀತಿಯಾದಾಗ , ಮೊದಲ ಕ್ರುಶ್ ಮಾತಾಡಿಸಿದಾಗ, ಅಪ್ಪನ ಕೂಡಿಸಿಕೊಂಡು ಬೈಕ್ ಮೇಲೆ ಸವಾರಿ ಮಾಡಿದಾಗ ,ಅಮ್ಮನ ಸೀರೆ ಉಟ್ಟುಕೊಂಡಾಗ, ಅಣ್ಣನ ಜೊತೆ ಜಗಳವಾಡಿ ಮತ್ತೇ ಮಾತಾಡಿದಾಗ, ಅಕ್ಕನ ಅಕ್ಕರೆ ಸಿಕ್ಕಾಗ, ತಂಗಿಗೆ ಉಡುಗೊರೆ ಸಿಕ್ಕಾಗ, ಸಿಲ್ಕ್ ಚೋಚ್ಕಲ್ತೆ ಕೊಟ್ಟಾಗ, ಅವಳಿಂದ ಸಿಹಿ ಮುತ್ತು ಸಿಕ್ಕಾಗ , ಹಬ್ಬದ ದಿನದೊಂದು ಮನೆಮಂದಿ ಸೇರಿದಾಗ . ಊರ ಜಾತ್ರೆಗೆ ಗೆಳೆಯರೊಂದಿಗೆ ಹೋದಾಗ , ಬಾಲ್ಯದಲ್ಲಿ ಜಾತ್ರೆಯಲ್ಲಿ ಕಳೆದು ಹೋಗಿ ಮತ್ತೇ ಅಮ್ಮನ ಮಡಿಲು ಸೇರಿದಾಗ, ಅಪ್ಪನ ಜೊತೆ ಹೊಲಕ್ಕೆ ಹೋದಾಗ , ಒಳ್ಳೆ ಅಂಕ ಪಡೆದು ಊರುತುಂಬಾ ನೀವು ಸುದ್ದಿ ಆದಾಗ , ಪರಿಚಯವಿರದ ನಳುಚೆಂದದ ಹುಡುಗಿ ನಿಮ್ಮ ನಂಬರ್ ಕೇಳಿದಾಗ , ಅಮ್ಮನ ಮಡಿಲ ಮೇಲೆ ಮಲಗಿದ್ದಾಗ , ಊಟ ಮಾಡಲು ಬೇಸರವೆನಿಸಿ ಅಮ್ಮನ ಕೈತುತ್ತಲೇ ಊಟ ಮಾಡಿದಾಗ , ಸಚಿನ್ ಸೆಂಚುರಿ ಹೊದೆಯ್ಕುವುದನ್ನು ನೋಡಿದಾಗ , ರಾಷ್ಟ್ರಗೀತೆ ಕೇಳಿದಾಗ , ಮಾತೃಭಾಷೆಯಲ್ಲೇ ಮಾತಾಡುವಾಗ, ಮೊದಲ ಕೆಲಸ ಸಿಕ್ಕಾಗ . ಮೊದಲ ಸಂಬಳ ಬಂದಾಗ,
ನಮಗೆ ಇಷ್ಟವಾಗುವ ಒಂದು ಸಿನೆಮಾ ನೋಡಿದರೆ, ಅಚ್ಚು ಮೆಚ್ಚಿನ ಗಾಯಕನ ಎದುರುಗದೇನೆ ಸಿಕ್ಕರೆ , ಇರುಲಿನಲ್ಲಿ ಖಾಲಿ ಇರುವ ರೋಡಿನಲ್ಲಿ ಬೈಕಿನ ಮೇಲೆ ಅತೀ ವೇಗವಾಗಿ ಹೋಗುವಾಗ, ಮಳೆಬಂದು ನಿಂತು ಆ ಸಿಹಿನ್ ತಂಗಾಳಿಯಲಿ ಸುಮ್ಮನೆ ನಡೆಕೊಂಡುವಾಗ, ಕಡಲ ತೀರದ ಅಲೆಗಳ ಸದ್ದನ್ನು ಮೌನದಲ್ಲೇ ಆಲಿಸುತ್ತಿರುವಾಗ ಕಡಲಾ ಅಲೆಗಳು ಬಂದು ನಿಮ್ಮ ಪಾದ ಸವರಿದಾಗ , ನಿಮ್ಮನ್ನು ತಮ್ಮತ್ತ ಸೆಳೆದಂತೆ ಭಾಸವಾದಾಗ , ಕಡಲ ತೀರದಿ ನಡೆಯುತ್ತಾ ನೀವು ಬಿಟ್ಟ ಹೆಜ್ಜೆ ಗುರುತುಗಳು ಅಲೆಗಳು ಅಳಿಸುವುದನ್ನು ಕಂಡಾಗ,  ಮೊದಲ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಉಡುಗೊರೆ  ಕೊಟ್ಟಾಗ , ಮೆಚ್ಚಿನ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನು ಆಚರಿಸುವಾಗ, ದೂರದಲ್ಲಿರುವ ಸ್ನೇಹಿತೆ/ ಸ್ನೇಹಿತನೊಂದಿಗೆ  ಮಾತನಾಡುವಾಗ,  ಫೇಸ್ಬುಕ್ ನಲ್ಲಿ ನಿಮ್ಮ ಫೋಟೋ ಗೆ ಹೆಚ್ಚು ಹೆಚ್ಚಿ ಲೈಕ್ ಬಂದಾಗ, ನಿಮ್ಮ ಕೆಲಸ ಮೆಚ್ಚಿ ನಿಮ್ಮ ಮ್ಯಾನೇಜರ್ ಶಹಭಾಶ್ ಗಿರಿ ಕೊಟ್ಟಾಗ., ನಿಮ್ಮ ಗೆಳತಿಯೊಂದಿಗೆ ಬೈಕ್ನಲ್ಲಿ ಸುತ್ತುವಾಗ ,ಗೆಳೆಯರೊಂದಿಗೆ ಟ್ರಿಪ್ ಹೋದಾಗ, ಬಾಲ್ಯದ ಸ್ನೇಹಿತ ಧಿಡಿರನೆ ಬಸ್ ಸ್ಟಾಪ್ ನಲ್ಲಿ ಸಿಕ್ಕಾಗ ,

ಈ ಎಲ್ಲ ಅನುಭವಗಳು ನಮಗೆ ಅತ್ಯಂತ ಖುಷಿಕೊಡುತ್ತವೆ.  ಈ ಪುಟ್ಟ ಪುಟ್ಟ ಸಂತೋಷಗಳು ನಮ್ಮನ್ನು ಪುಟ್ಟ ಮಗುವಿನ ಮನಸಿನಾಗಿಸುತ್ತವೆ.. ನಾವು ಇಂದು ಏನೇ ಆದರು ಆ ಪುಟ್ಟ ಕನಸುಗಳು ಎಲ್ಲವನು ಮರೆಸಿ ನಿಜವಾದ ಸಂತೋಷ ಪಡಿಸುತ್ತವೆ. ನಾವು ಏನೇ ಅಂದರೂ ನಮ್ಮ ಮನಸನು ನಾವು ಎಂದಿಗೂ ಮಗುವಿನ ಹಾಗೆ ಇತ್ತು ಕೊಳ್ಳಬೇಕು. ನಾವು  ಎಲ್ಲವನ್ನು ಅನುಭವಿಸಬೇಕು, ಅನುಭವದ ಸುಖವನ್ನು ಅನುಭವಿಸಿಯೇ ತಿಳಿಯಬೇಕು.

ಈ ಬದುಕು ಸುಂದರ ಇಲ್ಲಿ ಎಲ್ಲವೂ ನಶ್ವರ. ಹುಟ್ಟು ಸಾವಿನೊಳಗೆ ನಾವು ಬದುಕುವ ಈ ಜೀವನ ಕೆಲವ ಓಪಚಾರಿಕ ವಾಗದೆ ಒಂದು ಸುಂದರ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು
ನಮ್ಮ ಅನುಭವಗಳೇ ನಮಗೆ ಪಾಠವಾಗುತ್ತವೆ. ಆ ಪಾಠಗಳಿಂದಲೇ ನಾವು ಬದುಕನ್ನು ಎಚ್ಚರದಿಂದ ಬದುಕ ಬೇಕು. ಒಂದು ಇರುವೆಗೂ ಒಂದು ಬದುಕಿದೆ. ಆದರೆ ಬುದ್ಧಿಜೀವಿ ಅನಿಸಿಕೊಂಡ ನಾವು ಭುದ್ದಿಗೆಡಿ ತರ ಬದುಕುತಿದ್ದೇವೆ. ನಮ್ಮ  ಬದುಕು ತೀರುವುಗಳನ್ನೂ ಪಡೆದು ಇನ್ನು ಸುಂದರವಾಗುತ್ತದೆ. ಬದಲಾವಣೆ ಜಗದ ನಿಯಮ ಆದರೆ ನಾವು ನಮ್ಮ ತಾಣವನ್ನು ಕಳೆದುಕೊಳ್ಳದೆ , ನಮ್ಮ ರೀತಿಯಂತೆ ಬದುಕಿ ನಮ್ಮ ಸಿದ್ದಾಂತಗಳನ್ನೂ ಗಾಳಿಗೆ ತೋರದೆ , ನಮ್ಮೆ ಅದ ಸಿಂಹನಡೆ ನಡೆದು ಬದುಕು ಸಾಗಿಸಬೇಕು

ನಕ್ಕಷ್ಟು ನಮ್ಮ ಆಯಸೂ ಜಾಸ್ತಿ ಆಗುತ್ತಂತೆ . ಬದುಕಿನ ಅನುಭವಗಳಿಗೆ ಒಂದೇ ತೆರನಾದ ಮನಸ್ಥಿತಿ ಬೆಳೆಸಿಕೊಂಡು  ಬದುಕನ್ನು ಸಾಗಿಸಬೇಕು. ನಾವು ಎಷ್ಟು ದಿನ ಬದುಕಿದ್ದೇವೆ ಅನ್ನುವದಕಿಂತ ಹೇಗೆ ಬದುಕಿದ್ದೇವೆ ಅನ್ನುವುದೇ ಬದುಕಿನ ಸಾರಾಂಶ.

ಹೀಗೆ ಪುಟ್ಟ ಪುಟ್ಟ ಸಂತೋಷಗಳು ನಮ್ಮ ಬದುಕನ್ನೇ ಸುಂದರವಾಗಿಸುತ್ತವೆ. ನಮ್ಮಲ್ಲಿ ಎಷ್ಟೇ ದುಡ್ಡಿದ್ದರೂ, ಎಷ್ಟೋ ಬಂಗಲೆ ,ಕಾರಿದ್ದರೂ ಈ ಪುಟ್ಟ ಸಂತೋಷಗಳನ್ನು ನಾವು ಅನುಭವಿಸದಿದ್ದರೆ ಬದುಕು ವ್ಯರ್ಥ ವಾದಂತೆ. ಅದಕ್ಕೆ ಯಾವುದೇ ಬೆಲೆ ಬರುವುದಿಲ್ಲ. ಇಂತಹ ಪುಟ್ಟ ಸಂತೋಷಗಳು ನಿಮ್ಮದಾಗಲಿ .

ಮೊನ್ನೆ ಕೋಕಾಕೋಲ ಅವರ  Coca-Cola International Day of Happiness http://CokeURL.com/96jnc.

ವಿಡಿಯೋ ನೋಡಿದ ಮೇಲೆ ನನಗೆ ಸಂತೋಷವೆಂದರೆ ಏನು ಎಂಬ ಸಣ್ಣ ಪ್ರಶ್ನೆ ಹುಟ್ಟಿಕೊಂಡಿತು. ಅದಕ್ಕೆ ಬರೆದ ಲೇಖನವಿದು. ನಿಮ್ಮ ಮೊಗದ ಮೇಲೆ ನಗುವು ಸದಾ ಇರಲಿ. ಆ ಪುಟ್ಟ ಪುಟ್ಟ ಸಂತೋಷಗಳು ನಿಮ್ಮನ್ನು ಸದಾ ಮಗುವಿನಂತೆ ಇಟ್ಟಿರಲಿ.





ಹೊಸ ಬದುಕು...

ನಾವೆಲ್ಲರೂ ನಮ್ಮೊಳಗೇ ಒಂದು ಸಲ ಸತ್ತು ಬದುಕಬೇಕು. ಮತ್ತೆ ಹುಟ್ಟಿ ಹೊಸಬರಾಗಬೇಕು. ನೂತನ ಕನಸನ್ನು
ನನಸಾಗಿಸಲು. ಹಳೆ ನೆನಪು ಮರೆತು ಮತ್ತೆ ಜೀವಿಸಲು. ಅಂತಹ ಸಮಯದಲ್ಲಿ ನಮ್ಮ ಎದೆಯಲ್ಲಿ ಹೊಸದೊಂದು ಬೆಳೆಕು ಸಂಚರಿಸುತ್ತದೆ. ಅಂಧಕಾರದಿಂದ ಹೊರತಂದ ಬೆಳಕದು. ಅಂತ ಬೆಳಕು ನಮ್ಮದಾಗಬೇಕಾದರೆ ನಮ್ಮಲ್ಲಿ ಕ್ರಾಂತಿ ಮೂಡಬೇಕು. ಒಂದು ಸಂಚಲನ ಉಂಟಾಗಬೇಕು ಆವಾಗ ಮಾತ್ರ ನಾವು ಹೊಸಬರಾಗಲು ಸಾಧ್ಯ ಹಾಗೂ ಏನಾದರೂ ಸಾಧಿಸಲು ಸಾಧ್ಯ.

ನನ್ನ ಜೀವನದಲ್ಲಿ ನಾನು ಅನುಭವಿಸಿದ ಒಂದು ಸಣ್ಣ ಅನುಭವವನ್ನು ಇಲ್ಲಿ ತೆರೆದಿಡುತ್ತೇನೆ.

ನಾನಾಗ ಪಿಯುಸಿಯಲ್ಲಿ ಓದುತ್ತಿದ್ದೆ. ಅದೇ ಮೊಟ್ಟ ಮೊದಲ ಬಾರಿಗೆ ನಾನು ಮನೆ ಬಿಟ್ಟು ಸ್ವಲ್ಪ ದೂರದ ಧಾರವಾಡದ
ವಿದ್ಯಾಗಿರಿಯ ಜೆ.ಎಸ್.ಎಸ್. ಕಾಲೇಜಿಗೆ ಸೇರಿಕೊಂಡಿದ್ದೆ. ನಮ್ಮ ಸಂಬಂಧಿಕರ ಮನೆಯಿದ್ದರೂ ಓದುವ ವಾತವರಹಣವಿರುವ ಹಾಸ್ಟೆಲ್ ನಲ್ಲಿ ಇದ್ದೆ. ಮೊದಲು ನಾಲ್ಕು ತಿಂಗಳು ಅಲ್ಲಿನ ಊಟ ,ವಸತಿ ಸೌಕರ್ಯ ಎಲ್ಲವೂ ಇಷ್ಟವಾಯಿತು. ಹೊಸ ಗೆಳೆಯರು, ಸುಂದರ ಕ್ಯಾಂಪಸ್ ಎಲ್ಲವೂ ಸುಂದರವಾಗಿತ್ತು. ಮನೆಯಿಂದ ಅದೇ ಮೊದಲ ಸಲ ಹೊರಬಂದಿದ್ದರೂ ಮನೆಯ ನೆನಪು ಬಾರದ ಹಾಗೆ ಗೆಳೆಯರೊಂದಿಗೆ ಆರಮಾಗಿದ್ದೆ.

ಅದಾಗಿ ಆರು ತಿಂಗಳ ನಂತರ ಮೊದಲ ಬಾರಿಗೆ ನನಗೆ ಹೋಂ ಸಿಕ್ಕ್ನೆಸ್ಸ್ ಕಾಡಲು ಆರಂಭವಾಯಿತು. ಕಾಲೇಜಿನಿಂದ ಬಂಡ ಮೇಲೆ ದಿನವೂ ಏನೋ ನೆಗೆಟಿವ್ ವಿಚಾರಗಳು ಬರುತಿದ್ದವು. ಕಣ್ಣೀರೂ ತಂತಾನೆ ಹರಿಯುತಿತ್ತು. ಮೊದಮೊದಲು ಅದೂ ಸಹಜವಂತ ನಾನು ನಿರ್ಲಕ್ಷಿಸಿದೆ. ಆದರೆ ಅದೊಂದಿನ ನನಗೆ ಅರಿಯದ ಹಾಗೆ
ಕಾಲೇಜು ಬಿಟ್ಟು ಊರಿಗೆ ಹೊಡಿಹೊಗೋಣ ಅನ್ನುವಷ್ಟು ಬೇಜಾರಾಗುತ್ತಿತ್ತು. ಮನೆಗೆ ಕರೆ ಮಾಡಿ ಅಪ್ಪ ಅಮ್ಮನ ಜೊತೆ ಮಾತಾಡುತ್ತ ಅಳತೊಡಗಿದೆ. ನನ್ನ ಅಮ್ಮ ಗಾಬರಿಗೊಂಡು ಮರುದಿನವೇ ಧಾರವಾಡಕ್ಕೆ ಬಂದರು. ಕಾಲೇಜಿಗೆ ರಜಾ ಹಾಕಿ ನಮ್ಮ ಸಂಬಧಿಕರ ಮನೆಗೆ ಹೋದೆ. ಮನೆಯಲ್ಲಿಯೇ ನಾಲ್ಕು ದಿನವಿದ್ದು ಮನೆಯಿಂದಲೇ ಕಾಲೇಜಿಗೆ ಪ್ರಯಾಣಿಸತೊಡಗಿದೆ

೧೫ ದಿನ ಕಳೆಯಿತು. ಅಮ್ಮ ಊರಿಗೆ ವಾಪಸ್ಸಾದರು. ಮತ್ತೆ ನಾನು ಹಾಸ್ಟೆಲ್ ಗೆ ಬಂದೆ. ಒಂದೆರಡು ದಿನ ಕಳೆದ ಮೇಲೆ ಮತ್ತದೇ ನೆಗೆಟಿವ್ ವಿಚಾರಗಳು ಮತ್ತೆ ಅಳು . ನನ್ನ ಅಪ್ಪ ಮತ್ತು ಅಮ್ಮನಿಗೆ ಮತ್ತೆ ಗಾಬರಿ.
ನನ್ನ ಅಪ್ಪ ನಾನು ಈ ರೀತಿ ಹಿಂಸೆ ಪಡುತಿರುವುದು ನೋಡಿ, ಕಾಲೇಜ್ ಬಿಟ್ಟು ಬಂದು ಬಿಡು ಪರವಾಗಿಲ್ಲ. ನನಗೆ ನಿನ್ನ ಖುಷಿ ಮುಖ್ಯ ಎನ್ನುತ್ತಿದ್ದರು. ಮತ್ತೆ ನನ್ನ ಅಮ್ಮ ಧಾರವಾಡಕ್ಕೆ ಬಂದರು. ನಾನು ಮನೆಗೆ ಹೋದೆ. ಆದರೆ ಅಳು ನಿಲ್ಲಲಿಲ್ಲ. ಮನೆಯವರಿಗೆಲ್ಲ ಗಾಬರಿ. ಮತ್ತೆ ಒಂದು ವಾರ ಕಾಲೇಜಿಗೆ ರಜೆ ಹಾಕಿದೆ. ಅಮ್ಮನ ಜೊತೆ ಕಾಲ್ ಕಳೆದೆ . ಆದರೂ ನನ್ನ ಮನಸ್ಸು ಕುಗ್ಗಿತ್ತು. ಕೊನೆಗೆ ನನ್ನ ಅಮ್ಮ ನನ್ನ ಕರೆದುಕೊಂಡು ಒಬ್ಬ ಭವಿಷ್ಯ, ಜ್ಯೋತಿಷ್ಯ ಹೇಳುವ ವ್ಯಕ್ತಿಯ ಕಡೆ ಕರೆದುಕೊಂಡರು. ಮೊದಲಿಗೆ ಅದು ಮಂತ್ರವಾದಿ ಮನೆಎಂದುಕೊಂಡಿದ್ದೆ.!

ಅವರು ನನಗೆ ಕೆಲವು ಪ್ರಶ್ನೆಗಳು ಕೇಳಿದರು. ನಾನು ಉತ್ತರ ಕೊಟ್ಟೆ. ” ನೀನು ಭವಿಷ್ಯ ಬಗ್ಗೆ ತುಂಬಾ ವಿಚಾರ ಮಾಡುತ್ತಿ, ಅದಕಾಗಿ ನಿನಗೆ ಈ ರೀತಿ ನೆಗೆಟಿವ್ ವಿಚಾರಗಳು ಬರುತ್ತಿರುವುದು ಹಾಗೂ ನಿನ್ನ ಮನಸು ಅನತಹ ವಿಚಾರದಿಂದಲೇ ಕುಗ್ಗಿ ಹೋಗಿರುವುದು ” ಅಂದರು. ನಂತರ ಒಂದಿಷ್ಟು ಕುಂಕುಮ ಮತ್ತು ಒಂದು ದಾರವನ್ನು ನನ್ನ ಕೈಗೆ ಕಟ್ಟಿದರು. ಅಮ್ಮ ನನ್ನು ಮಾತೆ ಮನೆಗೆ ಮರಳಿದೆವು
ಅಮ್ಮ ನನಗೆ ಒಂದು ಮಾತು ಹೇಳಿದರು ” ಎಷ್ಟೋ ಮಂದಿಗೆ ಓದಲು ಅವಕಾಶವಿಲ್ಲ , ಈರಲು ಮನೆಯೆ ಇಲ್ಲ, ಆದರೂ ಅಂತಹ ಅಡೆತಡೆಗಳ ಮಧ್ಯ ಎಷ್ಟು ಹುಡುಗರು ಜೀವನ ಸಾಗಿಸುತ್ತಿದ್ದಾರೆ. ನಿನಗೆ ಎಲ್ಲವೂ ಸೌಲಭ್ಯವಿದೆ. ಒಳ್ಳೆಯ ಕಾಲೇಜು ಸಿಕ್ಕಿದೆ. ಇದರ ಪ್ರಯೋಜನ ತೆಗೆದು ಕೊಂದು ನಿನ್ನ ಜೀವನದಲ್ಲಿ ಮುಂದೆ ಬಾ. ಇಲ್ಲವಾದರೆ ಹೇಳು ನಾಳೆ ಇಬ್ಬರೂ ಮನೆಗೆ ಹೋಗೋಣ. ” ಎಂದು ಕಣ್ಣೀರಿಟ್ಟಳು
ಆ ಕ್ಷಣ ನನಗೆ ಇನ್ನು ನೆನಪಿದೆ.
ಅದೇ ಕೊನೆ ನಾನೆಂದು ಅಳಬಾರದು. ಧೈರ್ಯದಿಂದಲೇ ವಾಪಸ್ಸೂ ಹೋಗಬೇಕೆಂದು ನಿರ್ಧರಿಸಿದೆ. ಅದರಂತೆ ನನ್ನ ಅಮ್ಮ ಊರಿಗೆ ಹೊರಟರು. ನಾನು ಪುನಃ ಹಾಸ್ಟಲ್ ಗೆ ಹೋದೆ. ಒಂದು ದಿನವೂ ನಾನು ಅಳಲಿಲ್ಲ . ಅಂತ ನೆಗಟಿವ್ ವಿಚಾರಗಳು ಒಮ್ಮೆಯೂ ಮರಳಿಲ್ಲ. ಓದುವದೊಂದೇ ನನ್ನ ಗುರಿಯಾಯಿತು. ಪ್ರಥಮ ಪಿಯುಸಿಯಲ್ಲಿ ಶೇ. ೯೦%.
ಗಳಿಸಿದೆ. ಮರುವರ್ಷ ದ್ವಿತೀಯ ಪಿಯುಸಿಯಲ್ಲಿ ಶೇ.೯೧% ಗಳಿಸಿ ಕಾಲೇಜಿಗೆ ಆರನೇ ಸ್ಥಾನಕ್ಕೆ ಬಂದೆ.
ಕಾಲೇಜಿನ ತೋಪ್ಪೆರ್ಸ್ ಲಿಸ್ಟ್ ನಲ್ಲಿ ನನ್ನ ಫೋಟೋದೊಂದಿಗೆ ನನ್ನ ಹೆಸರು ಹಾಕಲಾಗಿತ್ತು
ಮಾತೆ ನನ್ನ ಅಮ್ಮ ಹೇಳಿದ ಮಾತು ನೆನಪಾಯಿತು ” ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ”. :-)

ಹೀಗೆ ನಮಗೆಲ್ಲರಿಗೂ ಒಂದಲ್ಲ ಒಂದು ಅಡೆತಡೆಗಳು ಬರುತ್ತವೆ. ನಾವು ಅವುಗಳನ್ನು ಮೀರಿ ಬದುಕಿನಲಿ ನಮ್ಮ ಗುರಿಗಾಗಿ ಹೋರಾಡಬೇಕು. ಸಣ್ಣ ಸಣ್ಣ ಗೆಲುವನ್ನು ಒಗ್ಗೂಡಿಸಿ ಬದುಕಿನ ದೊಡ್ಡ ಗುರಿಗಾಗಿ ಶ್ರಮಿಸಬೇಕು.

ಮೊನ್ನೆ Housing.com   https://housing.com/.  ವಿಡಿಯೋ ನೋಡಿದ ಮೇಲೆ . ಈ ಘಟನೆ ನೆನಪಾಯಿತು.
ನಾಳೆಯಾ ಭರವಸೆಯ ದಿನಗಳು ನಮ್ಮದಾಗಬೇಕಾದರೆ ನಾವು ತಾಳ್ಮೆ ಕಾಪಾಡಿಕೊಳ್ಳಬೇಕು.
ಒಂದು ಸಣ್ಣ ಘಟನೆಗೆ ನಮ್ಮನ್ನು ಮತ್ತೆ ಗೆಲುವಿನ ಹತ್ತಿರ ಕರೆದೊಯ್ಯುತ್ತದೆ .
ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.ಆ ನೆನಪನ್ನು ಮೊತ್ತೊಮ್ಮೆ ಜೀವಿಸಿ.

ಎಂದೂ ಮರೆಯಲಾಗದ ಗೆಳೆಯರು

ಎಂದೂ ಮರೆಯಲಾಗದ ಗೆಳೆಯರು

ನಮ್ಮ ಬದುಕಿನಲಿ ನಮಗೆ ಅನೇಕ ಜನ ಬಂದು ಹೋಗುತ್ತಾರೆ. ಕೆಲವರು ಕೇವಲ ಸ್ವಲ್ಪ ಸಮಯ ನಮ್ಮೊಂದಿಗೆ ಇದ್ದರೂ ಅವರ ನೆನಪುಗಳು ಅವರ ಕೊಟ್ಟು ಹೋದ ನೆನಪುಗಳು ನಮ್ಮನ್ನು ಸದಾ ಕಾಡುತ್ತವೆ.
ಅಂತಹ ಕೆಲವು ತಾಜಾ ನೆನಪುಗಳನ್ನು ನಾನಿಲ್ಲಿ ತೆರೆದಿದುತ್ತೇನೆ.

ಒಂದು ನನಗೆ ಸಿಕ್ಕ ಹೆಲೆಯರಲ್ಲಿ ಚಂದ್ರಶೇಖರ್ ಒಬ್ಬ .. ಅವಿನ್ಗೆ ನಾವೆಲ್ಲಾ ಚಂದ್ರು ಎಂತಲೇ ಕರಿತ್ತೆದೆವು. ಅವನ ಮೊದಲ ಪರಿಚಯವಾಗಿದ್ದು ಜೆ ಎಸ್ ಎಸ್ ಕಾಲೇಜಿನಲ್ಲಿ. ಅವನು ನಾನು ಒಂದೇ ಹಾಸ್ಟೆಲ್ ನಲ್ಲಿ ಇದ್ದೆವು ಆದರೆ ಅವನಿಗೆ ನನಗೆ ಅಸ್ಟೊಂದು ದೊಡ್ಡ ಸ್ನೇಹವ್ರಿರಲಿಲ್ಲ. ಆದರೆ ಊಟಕ್ಕೆ ಹೋಗುವಾಗ , ಸಂಜೆ ಚಹಾ ಕುಡಿಯಲು ಅವನು ನಾನು ಜೊತೆಯಲೇ ಹೋಗುತ್ತಿದ್ದೆವು.

ಪಿಯುಸಿ ಮುಗಿಯಿತು, ನಂತರ ನನಗೆ ಎಸ್ ಜೆ ಸಿ ಇ ಕಾಲೇಜು ಸಿಕ್ಕಿತು.  ಒಂದು ಅಚ್ಚರಿ ಎಂದರೆ ನಾನು ಅವನೂ ಇಬ್ಬರು ಒಂದೇ ಹಾಸ್ಟಲ್ ಹಾಗೂ ಒಂದೇ ರೂಂನಲ್ಲಿದ್ದೆವು. ಅದು ನನ್ನು ಅದೃಷ್ಟವೂ ಹೌದು.
ಅವನು ತುಂಬಾ ಮಾತನಾಡದ ಹಾಗೂ ಸ್ವಲ್ಪ ಸೌಮ್ಯ ಸ್ವಭಾವದವಾನ್ಗಿದ್ದ. ಅವನಿಗೆ ಸಿಟ್ಟು ಬರುತ್ತಿರಲಿಲ್ಲ. ಅವನದು ತುಂಬಾ ಶಿಸ್ತು. ಅವನ ಉಡುಗೆ ಇರಲಿ , ಓದುವಾಗ ಪುಸ್ತಕಗಲಿರಲಿ ಎಲ್ಲವೂ ಶಿಸ್ತು. ನನ್ನದು ಎಸಕ್ಟ್ಲ್ಯ್  ಒಪೋಸಿತೆ.

ಅವನು ನಾನು ಹೆಚ್ಚು ಹೊಂದಿಕೊದಿದ್ದು ಹಾಗು ಅರ್ಥ ಮಾಡಿಕೊಂಡಿದ್ದು ಅಲ್ಲಿಯೇ.  ಅವನು ನಾನು ಮೊದಲ ಸೆಮಿಸ್ಟರ್ನಿಂದಲೇ  ತುಂಬಾ ಹತ್ತಿರವಾದೆವು. ನನ್ನ ಫ್ಯಾಮಿಲಿ ವಿಚಾರಗಳನ್ನು ಅವನೊಂದಿಗೆ ನಾನು ಶೇರ್ ಮಾಡುತ್ತಿದ್ದೆ.. ಅವನ್ನು ತನ್ನ ಅಣ್ಣ ಅಕ್ಕ ಮನೆಯ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ. ಅವನಿಗೆ ಇಷ್ತ್ವಾದದೆಂದರೆ
ಬೈಕ್ ರೈಡಿಂಗ್. ಅದಕಂತಲೇ ಅವನು ಹಠವಿಡಿದು ಮೂರನೇ ಸೆಮಿಸ್ಟರ್ನಲ್ಲೆ  ಒಂದು ಬೈಕ್ ತೆಗೆದಿಕೊಂಡ.
ನಾನೂ ಅವನು ರವಿವಾರ ಅದರಲ್ಲಿಯೇ ಆಚೆ ಹೋಗುತಿದೆವು..

ಅವನು ತುಂಬಾ ಸೂಕ್ಷ್ಮ ವಿಚಾರಗಳನ್ನು ಹೆಚ್ಚು ಮತುರಿಟಿ ಇಂದ ನಿಭಾಯಿಸುತ್ತಿದ್ದ ಅಲ್ಲದೆ ಪರಿಕ್ಷ್ಯಲ್ಲಿ ಕಡಿಮೆ ಅಂಕ ಬಂದರೆ , ಯಾವದೋ ಇಂಟರ್ನಲ್ಸ್ ನಲ್ಲಿ ಕಡಿಮೆ ಬಂದರೆ ಏನನ್ನು ತಲೆಗೆ ಹಚ್ಚಿಕೊಲ್ಲುತ್ತಿದ್ದಿಲ್ಲ. ಆದರೆ ಅವನ ಪಾಲಿನ ಪ್ರಯತ್ನ ಯಾವಗಲು ಮಾಡುತ್ತಿದ್ದ.

ಮೊತ್ತೊಂದು ಅವನಿಗೆ ಇಷ್ಟವಾದದೆಂದರೆ ಸಿನಿಮಾ ನೋಡುವುದು. ತೆಲಗು .ಕನ್ನಡ , ಇಂಗ್ಲಿಷ್ , ತಮಿಳು ಎಲ್ಲ ಭಾಷೆಯನ್ನೂ ಜೊತೆಗೆ ನೋಡುತ್ತಿದ್ದೆವು..
ಒಬ್ಬ ಒಳ್ಳೆಯ ಗೆಳೆಯ , ಒಬ್ಬ ಒಳ್ಳೆಯ ರೂಮತೆಸ್ ಆಗಿದ್ದೆವು. ನಮ್ಮ ಹುಟ್ಟುಹಬ್ಬಗಳನ್ನು ಜೋತೆಯೇಲ್ಲೇ ಆಚರಿಸಿಕೊಂದಿದೇವೆ. ಆ ನೆನಪುಗಳು ಇನ್ನು ಕಾದಿವೆ.

ಕೊನೆಯ ವರ್ಷ ನಾವು ಹೆಚ್ಚು ಕಾಲ ಜೊತೆಯಲ್ಲೇ ಕಳಿಯಲು ಆಗಲಿಲ್ಲ. ಏಕೆಂದರೆ ನಾನು ನನ್ನ ಮೊತ್ತಬ್ಬ ಸ್ನೇಹಿತ ಸೂರ್ಯನ  ಮನೆಯಲ್ಲೇ ಹೆಚ್ಹು ಕಾಲ ಕಳೆಯುತ್ತಿದ್ದೆ. ಆದರೆ ನಮ್ಮಿಬ್ಬರ ಸ್ನೇಹ ಇನ್ನು ಹಾಗೆ ಇದೆ.
ಹಾಸ್ಟೆಲ್ ಜೀವನ ನಮಗೆ ಎಲ್ಲ ಹೇಳಿ ಕೊಡುತ್ತದೆ ಅಲ್ಲದೆ ನಮಗೆ ಮರೆಯಲಾಗದ ಗೆಳೆಯರನ್ನು ಕೊಡುತ್ತದೆ.

ಚಂದ್ರು ಮತ್ತು ನಾನು ಇಬ್ಬರು ಟಕ್ಸ್ ಕಂಪನಿಗೆ ಸೆಲೆಕ್ಟ್ ಆಗಿದ್ದೆವು. ಇಬ್ಬರಿಗೂ ಅದು ಖುಶಿಕೊತ್ತಿತ್ತು.
ಹಾಸ್ಟೆಲ್ನಲ್ಲಿ  ಚಂದ್ರು , ಬಸು. ಶ್ರೀನಿವಾಸ, ಉದಯ ಹೀಗೆ ಹಲವು ಗೆಳೆಯರು ನನಗೆ ಇನ್ನು ಆ ಹಳೆಯ ನೆನಪುಗಳನ್ನು ಕೊಡುತ್ತಾರೆ. ಅವರು ನಾನು ಎಲಿಂದಲೂ ಬಂದು ಒಂದೇ ಕಾಲೇಜು , ಹಾಸ್ಟೆಲ್ ಸೇರಿ ಇಂದು  ಕೊನೆವರೆಗೆ ಜೊತೆಗಿರುವ ಸ್ನೇಹಿತರನತೆ ಇದ್ದೇವೆ..
ನಮ್ಮ ಬದುಕಿನಲ್ಲೂ ಹೀಗೆ ಆಕಸ್ಮಾತಾಗಿ ಯಾರೋ ಸಿಗುತ್ತಾರೆ. ಪರಿಚಯವಿರದಿದ್ದರೂ ,ಸಂಬಂಧವಿರದಿದ್ದರೂ ನಮಗೆ ಸಹಾಯ ಮಾಡಿ ಹೋಗಿರುತ್ತಾರೆ. ಅವರ ಮುಖ ಪರಿಚಯವೂ ಕೂಡ ನಮಗೆ ನೆನಪಿಗೆ ಬರುವುದಿಲ್ಲ. ನಮ್ಮ ಅನಿರೀಕ್ಷಿತ ಬದುಕಿನಲ್ಲಿ ಅಕಸ್ಮಾತಾಗಿ ಬಂದು ನಮ್ಮ ಬದುಕಿಗೆ ಅವರ ಒಂದಿಷ್ಟು ನೆನಪು ಕೊಟ್ಟು ಹೋಗಿರುತ್ತಾರೆ.
ಅಂತಹ ಅನಿರೀಕ್ಷಿತ ತಿರುವುಗಳಿಂದಲೇ ನಮ್ಮ ಬದುಕು ಸುಂದರವಾಗುತ್ತ ಹೋಗುತ್ತದೆ.

ನಾವು ಅಂತಹ ನೆನಪುಗಾನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು. ಕೆಲವು ಸಲಿ ನಮ್ಮ ಕೆಲಸದ ಒತ್ತಡದಿಂದ ಹಾಗೂ ಇನ್ನಿತರ ಟೆನ್ಶನ್ ಗಳಿದ ನಾವು ನಮ್ಮ ಸ್ನೇಹಿತರಿಗೆ ಸಮಯ ಕೊದವುದೇ ಇಲ್ಲ . ಆದರೆ ಅಂತಹ ಸ್ನೇಹಿತರನ್ನು ಕಳೆದುಕೊಳ್ಳುವುದು ತಪ್ಪು . ಅವರೊಂದಿಗೆ ಸದಾ ಸಂಪರ್ಕದಲ್ಲಿದ್ದು ಎಲ್ಲದಕ್ಕೂ ಮುಕ್ಯವಾಗಿ ಬೇಕಾದದ್ದು ಸ್ನೇಹ ಮತ್ತು ಪ್ರೀತಿ. ಅದೇ ನಮ್ಮ ಬದುಕಿನ ಜೀವಾಳ . ಎಷ್ಟು ದುಡ್ಡು ಗಳಿಸಿದ್ದರು ನಮಗೆ ನೆಮ್ಮದಿ ಕೊಡುವುದು ನಮ್ಮ ಸ್ನೇಹಿತರ ಮಾತುಗಳು ಹರಟೆಗಳು  ಸದಾ ಜೊತೆಯಲ್ಲೇ ನೆನಪಲ್ಲಿರುವ  ಸಂಬಂಧಗಳು

ಹೀಗೆ ಎಲ್ಲರು ಜೀವನದಲ್ಲೂ ಒಬ್ಬರು ಈ ರೀತಿ ಸಹಾಯ ಮಾಡಿರುತ್ತಾರೆ.
ಮೊನ್ನೆ Housing.com ಅವರ https://housing.com/.ವಿಡಿಯೋ ನೋಡಿದಾಗ ನನಗೆ ಈ ಘಟನೆ ನೆನಪಾಯಿತು.ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.
ಅಂದರೆ ಕಷ್ಟದ ದಿನಗಳಲ್ಲಿ ನಮ್ಮನ್ನು ಕೈ ಬಿಡದೇ ಕಷ್ಟದಿಂದ ನಮ್ಮನ್ನು ಪಾರು ಮಾಡಿ ಏನನ್ನು ಅಪೇಕ್ಷಿಸದೆ ನಮ್ಮ ಗೆಲುವನ್ನೇ ಮಾತ್ರ ಬಯಸುವ ವ್ಯಕ್ತಿಗಳವರು.
ಕೆಲವೊಬ್ಬರಿಗೆ ಅನೇಕ ಜನ ಗಾಡ್ ಫಾದರ್ ಆಗಿಬಿಡುತ್ತಾರೆ. ಅಶೋತೋದು ಒಳ್ಳೆಯ ಜನ ಅವರ ಜೀವನದಲ್ಲಿ ಬಂದು ಅವರಿಗೆ ಸಹಾಯ ಮಾಡಿರುತ್ತಾರೆ. ಕೆಲವೊಮ್ಮೆ ಅಂಥವರನ್ನು ನಾವು ಮರೆತು ಬಿಡುತ್ತೇವೆ. ಅಥವಾ ಅವ್ರು ತಮಗೆ ತಾವೇ ಕಣ್ಮರೆ ಆಗಿಬಿಡುತ್ತಾರೆ. ಆದರೆ ಅವರ ಸಹಾಯದಿಂದ ನಾವು ಅದೆಸ್ಟೋ ನಮ್ಮ ಜೀವನದಲ್ಲಿ ಮುಂದೆ ಬಂದಿರುತ್ತೇವೆ ,ಗೆಲುವನ್ನ ಕಂಡಿರುತ್ತೇವೆ. ಅಂಥವರನ್ನು ನೆನೆದು ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ..















ಮರೆಯದ ದಿನಗಳು..

ಮರೆಯದ ದಿನಗಳು..
ಬದುಕಿನಲಿ ನಾವು ಹಲವು ಘಟನೆಗಳಿಂದ ಕುಗ್ಗಿ ಹೋಗುತ್ತೇವೆ. ಅದರಿಂದ ಹೊರಬರಲು ಹೆಚ್ಚು ಕಷ್ಟ ಪಡುತ್ತೇವೆ. ಆದರೆ ನಮ್ಮ ಜೀವನವು ಸೋಲು ಗೆಲವು ಗಳಿಂದ ಎಂಬುವುದನ್ನು ನಾವು ಮರೆಯಬಾರದು. ನನ್ನ ಜೀವನದಲ್ಲೂ ನಾನು ಅನೇಕ ಬಾರಿ ಮನಸಿನ ಮೇಲೆ ನೊವುಆಗುವುದನ್ನು ಅನುಭವಿಸಿದ್ದೇನೆ . ಆದರೆ ಕಾಲವೇ ನನ್ನನ್ನು ಅದರಿಂದ ಪಾರುಮಾಡಿತು. ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದರೆ , ನಾನು ಪಿಯುಸಿ ಯಲ್ಲಿರಬೇಕಾದರೆ ನನಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬರುತ್ತಿದ್ದವು. ಎಷ್ಟು ಸಲಿ ಓದಿದರೂ ನನಗೆ ಕಡಿಮೆ ಅಂಕಗಳು ಬರುತ್ತಿದ್ದವು. ಆದರೆ ನನಗೆ ಅದರ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ಆದರೂ ಪ್ರತಿ ಸಲ ಕಡಿಮೆ ಅಂಕ ಬಂದಾಗ ನನಗೆ ತುಂಬಾ ಬೇಜಾರು ಆಗುತ್ತಿತು.

ಪ್ರತಿ ರವಿವಾರ ಪರೀಕ್ಷೆ ಇಡಲಾಗುತ್ತಿತ್ತು. ನನಗೆ ರಾಸಾಯನಿಕ ಮತ್ತು Physics  ವಿಷಯಗಳಲ್ಲಿ ನನಗೆ ಎಚ್ಚು ಅಂಕಗಳು ಬರುತ್ತಿದ್ದವು ಆದರೆ ಕೇವಲ ಗಣಿತದಲ್ಲಿ ಮಾತ್ರ ನನಗೆ ಕಡಿಮೆ ಅಂಕಗಳು ಬರುತ್ತಿದ್ದವು. ಅಷ್ಟಕ್ಕೂ ನಾನು ಆ ವಿಷಯವನ್ನು ಹೆಚ್ಚು ಸಲ ಓದುತ್ತಿದೆ ಆದರೂ ನನಗೆ ಹೆಚ್ಚು ಅಂಕಗಳು ನನಗೆ ಬರುತ್ತಿರಲಿಲ್ಲ.

ಒಂದು ದಿನ ನನಗೆ ಕೇವಲ ೫೬ ಅಂಕ ಬಂದಿತ್ತು ೧೦೦ ಅಂಕಗಳಿಗೆ, ಉಳಿದ ಎಲ್ಲ ವಿಷಯಗಳಲ್ಲಿ ನನಗೆ ೮೦ ಅಂಕಗಳಿಂದ ಹೆಚ್ಚು ಅಂಕ ಬರುತ್ತಿತ್ತು, ಇದರಿಂದ ನಂಗೆ ಹೆಚ್ಚು ಬೇಜಾರು ಆಗುತ್ತಿತು. ಆದರೂ ನನಗೆ ಹೆಚ್ಚು ಅಂಕ ತೆಗಿಯಬೇಕೆಂಬ ಹಠ ಬಿಡಲಿಲ್ಲ. ಒಂದು ದಿನ ನಾನು ನಿಶ್ಚಿಯಿಬಿತ್ತೆ. ನನಗೆ ಉಳಿದ ವಿಷಯಗಳಲ್ಲಿ ಕಡಿಮೆ ಬಂದರೂ ಈ ಗಣಿತ ವಿಷಯದಲ್ಲಿ ಮಾತ್ರ ಹೆಚ್ಚು ಅಂಕ ಬರಲೇಬೇಕು ಎಂಬ ಪಣ ತೊಟ್ಟೆ. ಅದರಂತೆ ಓದತೊಡಗಿದೆ

ಆಗ ನನ್ನು ಹಾಸ್ತಲ್ನಲ್ಕಿ ಇದ್ದೆ. ನನ್ನ ಗೆಳೆಯರೊಂದಿಗೆ ಹೆಚ್ಚು ಕಾಲ ಕಳೆದು ಅವರೊಂದಿಗೆ ನಾನು ಗಣಿತ ಕಲಿಯಲು ಪ್ರಾರಂಭ ಮಾಡಿದೆ. ಅವರು ಬೆಜಾಉ ಮಾಡಿಕೊಳ್ಳದೆ ನನಗೆ ಗಣಿತದ ಕೆಲವು ಕಟಿಣ ಕಾಂಸೆಪ್ತ್ಸ್ ಗಳನ್ನೂ ಸರಳವಾಗಿ ಅರ್ಥವಾಗುವ ಹಾಗೆ ಹೇಳತೊಡಗಿದರು. ಅದರಂತೆಏ ನಾನು ಹೆಚ್ಹು ಹೆಚ್ಚು ಓದತೊಡಗಿದೆ.
ಒಂದು ದಿನ ನನಗೆ ೧೦೦ ಅಂಕಕ್ಕೆ ೮೨ ಅಂಕ ಬಂದಿತ್ತು . ಅದು ನನ್ನ ಮೊದಲ ಗೆಲುವು. ಅದು ನನಗೆ ಎಚ್ಚು ಧೈರ್ಯ ತುಂಬಿತ್ತು. ಮತ್ತೆ ಮತ್ತೆ ಹೆಚ್ಚು ಓದತೊಡಗಿದೆ.

ರವಿ ಅಂತ ಒಬ್ಬ ನನ್ನ ಸ್ನೇಹ್ತಿತ ಹಾಗೂ ಬಂಟಿ ಅಂತ ಇನ್ನೊಬ್ಬ ಸ್ನೇಹಿತ ಇವರಿಬ್ಬರೂ ನನಗೆ ಹೆಚ್ಚು ಗಣಿತ ವಿಷಯಗಳನ್ನು ಹೇಳತೊಡಗಿದರು. ನಾನು ಕಲಿಯತೊಡಗಿದೆ. ಒಂದಾದಮೇಲೆ ಪರೀಕ್ಷೆಯಲ್ಲಿ ಉತ್ತಮ ಉತ್ತಮ ಅಂಕಗಳನ್ನು ಪಡೆಯತೊಡಗಿದೆ.

ದಿನಕ್ಕೆ ನಾನು ೨ ರಿಂದ ಮೂರು ತಾಸುಗಳ ವರೆಗೆ ಗಣಿತ ಅಭ್ಯಾಸ ಮಾಡತೊಡಗಿದೆ. ಇದರಿಂದ ನನಗೆ ಹೆಚ್ಚು ಆತ್ಮವಿಶ್ವಾಸ ಬರತೊಡಗಿತು. ಅದರಂತೆಯೇ ಹೆಚ್ಚು ಹೆಚ್ಚು ಲೆಕ್ಕಗಳನ್ನು ಬಿಡಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಸಿಸತೊಡಗಿದೆ.

ಆದಾಗಲೇ ನನ್ನ ಪಿಯುಸಿಯ ಪರೀಕ್ಷೆ ಆರಂಭವಾಯಿತು. ಪ್ರತಿದಿನವೂ ಗಣಿತದ ಮೇಲೆ ಹೆಚ್ಚು ವತ್ತಡ ಕೊಟ್ಟು ನನ್ನು ಓದತೊಡಗಿದೆ. ಪರೀಕ್ಷೆಯೂ ಮುಗಿಯಿತು. ಪರಿಕ್ಷೆಯಲ್ಲ್ಲಿ ನನ್ನು ಉತ್ತಮವಾಗಿ ಬರೆದಿದ್ದೆ. ರಿಸಲ್ಟ್ಸ್ ಆಗಿ ಕಾಯುತ್ತಿದೆ.

ಕೊನೆಗೂ ಪರೀಕ್ಷೆಯ ರಿಸಲ್ಟ್ಸ್ ಬಂದಿತು. ನನಗೆ ಗಣಿತದಲ್ಲಿ ೯೫ ಅಂಕ ಬಂದಿತ್ತು!! ನನ್ನ ಖುಷಿಯನ್ನು ಹೇಳಲು ಮಾತುಗಳೇ ಬಾರದಿದ್ದವು.

ಒಂದು ಕಷ್ಟದ ವಿಷಯಗಳನ್ನು ನಾವು ಹೆದರಿಕೊಂಡು ನಾವು ಅದರಿಂದ ದೂರವಿದ್ದರೆ ನಮಗೆ ಏನನ್ನು ಸಾಧಿಸಲು ಆಗುವುದಿಲ್ಲ ಅದನ್ನು ಹೆದುರಿಸಿ ಅದನ್ನು ಗೆಲ್ಲಲ್ಲು ಏನು ಮಾಡಬಹುದೋ ಅದನ್ನು ಮಾಡಲೇಬೇಕು.
ಒಂದು ಸೋಲು ಇನ್ನೊದು ಸೋಲಿಗೆ ಕರನವಾಗಬರದಷ್ಟೇ. ಗೆಲುವನ್ನು ಬೆನ್ನು ಹತ್ತಿದವನಿಗೆ ಯಾವುದೇ ನೋವುಗಳು ಬರಬಾರದು. ಅವುಗಳನ್ನು ತಡೆದುಕೊಂಡು ನಾವು ಜೀವಿಸಬೇಕು.

ಒಂದು ಗೆಲವು ನಮ್ಮನ್ನು ಕ್ಷುಇಗೊಲಿಸುತ್ತದೆ ಆದರೆ ಒಂದು ಸೋಲು ನಮಗೆ ಬದುಕಿನ ಪಾಠ ಹೇಳಿಕೊಡುತ್ತದೆ.
ಎನೆಯಾದರೂ ಕಷ್ಟದ ಹಿಂದೆ ಸುಖವಿದ್ದೆಇರುತ್ತಾದೆ. ನಾವು ಅ ಘಳಿಗೆಗೆ ಕಾಯಲೇಬೇಕು ಅಲ್ಲದೆ ನಾವು ಬದುಕಿನ ಎಲ್ಲ ಅನುಭವಗಳನ್ನು ನಾವು ಅನುಭವಿಸಲೇಬೇಕು ಅಂದರೆ ಮಾತ್ರ ನಾವು ಬದುಕಿನ ಮೌಲ್ಯವನ್ನು ಅರಿತುಕೊಳ್ಳುತ್ತೇವೆ
ಹೀಗೆ ನಮಗೆಲ್ಲರಿಗೂ ಒಂದಲ್ಲ ಒಂದು ಅಡೆತಡೆಗಳು ಬರುತ್ತವೆ. ನಾವು ಅವುಗಳನ್ನು ಮೀರಿ ಬದುಕಿನಲಿ ನಮ್ಮ ಗುರಿಗಾಗಿ ಹೋರಾಡಬೇಕು. ಸಣ್ಣ ಸಣ್ಣ ಗೆಲುವನ್ನು ಒಗ್ಗೂಡಿಸಿ ಬದುಕಿನ ದೊಡ್ಡ ಗುರಿಗಾಗಿ ಶ್ರಮಿಸಬೇಕು.

ಮೊನ್ನೆ Housing.com  https://housing.com/lookup ಅವರ Look Up.ವಿಡಿಯೋ ನೋಡಿದ ಮೇಲೆ . ಈ ಘಟನೆ ನೆನಪಾಯಿತು.
ನಾಳೆಯಾ ಭರವಸೆಯ ದಿನಗಳು ನಮ್ಮದಾಗಬೇಕಾದರೆ ನಾವು ತಾಳ್ಮೆ ಕಾಪಾಡಿಕೊಳ್ಳಬೇಕು.
ಒಂದು ಸಣ್ಣ ಘಟನೆಗೆ ನಮ್ಮನ್ನು ಮತ್ತೆ ಗೆಲುವಿನ ಹತ್ತಿರ ಕರೆದೊಯ್ಯುತ್ತದೆ .
ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.ಆ ನೆನಪನ್ನು ಮೊತ್ತೊಮ್ಮೆ ಜೀವಿಸಿ.ಹಳೆ ನೆನಪು ಮರೆತು ಮತ್ತೆ ಜೀವಿಸಲು. ಅಂತಹ ಸಮಯದಲ್ಲಿ ನಮ್ಮ ಎದೆಯಲ್ಲಿ ಹೊಸದೊಂದು ಬೆಳೆಕು ಸಂಚರಿಸುತ್ತದೆ. ಅಂಧಕಾರದಿಂದ ಹೊರತಂದ ಬೆಳಕದು. ಅಂತ ಬೆಳಕು ನಮ್ಮದಾಗಬೇಕಾದರೆ ನಮ್ಮಲ್ಲಿ ಕ್ರಾಂತಿ ಮೂಡಬೇಕು. ಒಂದು ಸಂಚಲನ ಉಂಟಾಗಬೇಕು ಆವಾಗ ಮಾತ್ರ ನಾವು ಹೊಸಬರಾಗಲು ಸಾಧ್ಯ ಹಾಗೂ ಏನಾದರೂ ಸಾಧಿಸಲು ಸಾಧ್ಯ.