ಮುದ್ದೇನಹಳ್ಳಿಯಲ್ಲಿ ಮುದ್ದೆ ತಿಂದು ಬೆಳೆದವರು
ಭಾರತದ ರತ್ನ ,ಕನ್ನಡದ ಹೆಮ್ಮೆಯ ಪುತ್ರರಿವರು
ಆಣೆಕಟ್ಟು ಕಟ್ಟಿಸಿ ,ಹೊಲ ಗದ್ದೆಗೆ ನೀರು ಹರಿಸಿ, ರೈತರ ದೇವರಾದವರು
ಕತ್ತಲೆ ನಾಡಿಗೆ ವಿದ್ಯುತ್ ಬೆಳಕನ್ನು ಹರಿಸಿ ಮೇಧಾವಿಯಾದವರು
ತಂತ್ರಜ್ಞಾನಕ್ಕೆ ಹೊಸ ಮಂತ್ರ ಹೇಳಿಕೊಟ್ಟರಿವರು
ದಿವಾನರಾದರೂ ಸರಳ ಮಾನವರರಂತೆ ಬದುಕಿ ಮಾದರಿಯಾದವರು
ಅವರೇ
ನಮ್ಮ ಸರ್.ಎಂ .ವಿಶ್ವೇಶ್ವರಯ್ಯನವರು
ಕರ್ನಾಟಕದ ಹೆಮ್ಮೆಯ ಅಭಿಯಂತರು .!
No comments:
Post a Comment